ಮನವು ಭಾರವೆನಿಸಿದೆ.. ಕಣ್ಣಿಗೆ ಕತ್ತಲು ಕವಿದಿರಲು ನಿನ್ನೆ ಮೊನ್ನೆಗಳ ಜ೦ಜಾಟವು ಸಾಕೆನಿಸಿದೆ.. ಸುತ್ತ ಜನರಿದ್ದರೂ ಒಬ್ಬ೦ಟಿ ಎನಿಸಿದೆ.. ಕಣ್ಣೀರು ಒರೆಸುವ ಕೈಯೊ೦ದೆ ಈಗ ಬೇಕಾಗಿದೆ.. ದಿನೇ ದಿನೇ ತನ್ನವರೇ ಇಲ್ಲವೇನೋ ಎನ್ನುವ ಹಾಗಾಗಿದೆ.. ಕಡುಗತ್ತಲಲಿ ಇನ್ನು ಹೊರಡುವುದೆಲ್ಲಿ.. ಯೋಚನೆಯೊಳಗೆ ಬಿದ್ದು ಹೊರಳಾಡುತಿರುವ ಮನಸ್ಸಿಗೆ ಬುದ್ಧಿ ಹೇಳಲಾರೆ.. ಆಗುವುದೆಲ್ಲವು ಆಗಲಿ.. ಮು೦ದೇನು ಕಾದು ನೋಡಬೇಕಾಗಿದೆ..